18/01/2023
*ಬೂತ್ ವಿಜಯ ಸಂಕಲ್ಪ ಅಭಿಯಾನ*
" *ಪೂರ್ವ ಸಿದ್ಧತಾ ಸಭೆ ಕುರೆಕುಪ್ಪ ಮಹಾಶಕ್ತಿಕೇಂದ್ರ - ತೋರಣಗಲ್ಲು (ರೈ. ನಿ).
ಸ್ನೇಹಿತರೇ, ಇಂದು ಭಾರತೀಯ ಜನತಾ ಪಕ್ಷದ ಸಂಘಟನೆಯ ವ್ಯವಸ್ಥೆಯನ್ನು ಪ್ರತಿ ಬೂತಿನ ಕಟ್ಟಕಡೆಯ ಮತಗಟ್ಟೆಗಳಲ್ಲಿಯೂ ಸಶಕ್ತಗೊಳಿಸುವ ಸದುದ್ದೇಶದಿಂದ ಸಂಡೂರು ತಾಲೂಕು ಬಿಜೆಪಿ ಮಂಡಲದ 'ಬೂತ್ ವಿಜಯ ಸಂಕಲ್ಪ ಅಭಿಯಾನದ ಸಂಚಾಲಕರಾದ ಶ್ರೀ.ಎನ್. ರಾಮಕೃಷ್ಣ (GCB) ಇವರ ಅಧ್ಯಕ್ಷತೆಯಲ್ಲಿ ಸಂಜೆ 5.00 ಗಂಟೆಗೆ 15ನೇ ವಾರ್ಡಿನ ತೋರಣಗಲ್ಲು (ರೈ.ನಿ) ಯ HLC ಕಾಲೋನಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕರಾದ ಶ್ರೀ ಎನ್.ರಾಮಕೃಷ್ಣ ಅವರು ಇದೇ ತಿಂಗಳು ರಾಜ್ಯಾದ್ಯಂತ 21 ರಿಂದ 29 ರವರೆಗೆ ನಡೆಯುವ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರಿಗೆ ಸಂಪೂರ್ಣ ಮಾಹಿತಿ ನೀಡುವಜೊತೆಗೆ ಈ ಅಭಿಯಾನ ಯಶಸ್ವಿಗೊಳಿಸುವಂತೆ ಸೂಚಿಸಿದರು.ಮುಂದುವರೆದು ಮಾತನಾಡಿದ ಅವರು ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ,ಕೇಂದ್ರ - ರಾಜ್ಯ ಬಿಜೆಪಿ ಸರ್ಕಾರಗಳ ಸಾಧನೆಗಳು, ಸಂಡೂರು ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಕೊಡುಗೆಗಳು ಸೇರಿದಂತೆ ಅನೇಕ ವಿಚಾರಗಳನ್ನು ಕಾರ್ಯಕರ್ತರಿಗೆ ಮನಮುಟ್ಟುವಂತೆ ತಿಳಿಸಿದರು.
ಈ ಸಭೆಯಲ್ಲಿ ಪುರಸಭೆ ಸದಸ್ಯರಾದ ಯರಿಸ್ವಾಮಿ,ನಾಗಲಕ್ಷ್ಮಿ ಪುಲಿಕೊಂಡ,ಸುರೇಶ್,ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಲತೀಫ್,ಸಂಡೂರು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷರಾದ ಎನ್.ಶಂಕ್ರಪ್ಪ ಸೇರಿದಂತೆ ತೋರಣಗಲ್ಲು (ರೈ. ನಿ) ಯ ಬೂತ್ ಸಂಖ್ಯೆ 106 ರಿಂದ 114 ರ ವರೆಗಿನ ಪಕ್ಷದ ಹಿರಿಯ ಮುಖಂಡರುಗಳು,ಪಕ್ಷದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಶಕ್ತಿಕೇಂದ್ರದ ಪ್ರಮುಖರು, ಎಲ್ಲಾ ಬೂತ್ ಅದ್ಯಕ್ಷರುಗಳು, ಹಾಗೂ ಕಾರ್ಯಕರ್ತರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಧನ್ಯವಾದಗಳೊಂದಿಗೆ,
Team, ವಿಜಯ ಸಂಕಲ್ಪ ಅಭಿಯಾನ 21-292023 ಸಂಡೂರು ಮಂಡಲ.
ಜೈ ಬಿಜೆಪಿ Jai BJP...