03/05/2023
* #ಬಜರಂಗದಳದ_ಕತೆ*
ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ *ಸಂಘಟನೆಯಾದರೂ* ಸಹ ಅದನ್ನು *ಬ್ಯಾನ್* ಮಾಡುತ್ತೇವೆ, ಅದು *PFI* ಆಗಿರಲಿ, *ಬಜರಂಗದಳ* ಆಗಿರಲಿ ಎಂಬ *ಕಾಂಗ್ರೇಸ್ ಪ್ರಣಾಳಿಕೆ* ಬಂದೊಡನೆಯೇ *ಬಿಜೆಪಿಗೆ* ಎಲ್ಲಿಲ್ಲದ ಪ್ರೀತಿ ಇವಾಗ *ಬಜರಂಗದಳದ* ಮೇಲೆ ಬಂದಂತಿದೆ.
ಆದರೆ ಇದೇ *ಸಂಘ* ಮತ್ತು *ಬಿಜೆಪಿ* ಬಜರಂಗಿಗಳನ್ನು ಬಳಸಿ *ಬಿಸಾಡಿದ್ದು ಮರೆತಿಲ್ಲವಲ್ಲಾ* .
*ಒಕ್ಕಲಿಗ ಸಮುದಾಯದವರಾಗಿದ್ದ* ರಘು ಸಕಲೇಶಪುರ ಅವರ ಮೇಲೆ ಒತ್ತಡ ತಂದು *ಬಜರಂಗದಳ ಸಂಘಟನೆ* ಬಿಡುವಂತೆ ಮಾಡಲಾಗಿದೆ.
ಹಾಗೆ ಮಾಡಿದವರು ಒಂದು ಜಾತಿಯವರು, ಹಿಂದೆಯೂ ಕೂಡ *ಮಂಜುನಾಥ್ ಮಂಡ್ಯ* ಅವರನ್ನು ಸಹ ಹಾಗೆಯೇ ಒತ್ತಡ ತಂದು ಸಂಘಟನೆ ಬಿಡಿಸಿ ಆ ಜಾಗಕ್ಕೆ ಉತ್ತಮ ಕುಲದ *ಸೂರ್ಯನಾರಾಯಣನನ್ನು* ಕೂರಿಸಿದ್ದರು, ಆತ ಕುಳಿತ ಮೇಲೆ *ಬಜರಂಗದಳ ಸಂಘಟನೆಯು* ಕರ್ನಾಟಕದಲ್ಲಿ ದುರ್ಬಲವಾಗಿತ್ತು, ಅದನ್ನು ಮತ್ತೆ ಮೇಲೇಳುವಂತೆ ಮಾಡಿದವರು *ರಘು ಸಕಲೇಶಪುರ.*
ಇದೀಗ ಸಂಘಟನೆ ಬಲವಾಯ್ತಲ್ಲಾ, ಇವರ ಅವಶ್ಯಕತೆ ಇಲ್ಲಾ. ಅದಕ್ಕೆ ಒತ್ತಡ ತಂದು ಬಿಡಿಸಿದ್ದಾರೆ.
*ಬೆಂಗಳೂರಿನಲ್ಲಿ* ಹಿಂದುತ್ವದ ಕಹಳೆ ಮೊಳಗಿಸಿದ *ಬಜರಂಗದಳದ* ಯುವಕ *ನಾಗಮಂಗಲ ತೇಜಸ್ ಗೌಡ* ಅವರನ್ನು ಸಹ ಪಿತೂರಿ ಮಾಡಿ *ಸಂಘಟನೆಯಿಂದ ಹೊರಗಿಟ್ಟಿದ್ದಾರೆ* , ಅವರು *SDPI, PFI* ಅವರ ಟಾರ್ಗೆಟ್ ಆಗಿದ್ದು *ಸೂಕ್ಷ್ಮವಾದ ಪ್ರದೇಶದಲ್ಲೇ* ಬದುಕು ನಡೆಸುತ್ತಿದ್ದಾರೆ.
ಹೆಸರಲ್ಲೇ *ಗೌಡ* ಇಟ್ಕೊಂಡು ಹೋದರೆ ಸಂಘಟನೆಯಲ್ಲಿ ಬೆಲೆಕೊಡುವರೇ?
ಕೇಸರಿ ಶಾಲು ಹಾಕೊಂಡು ಹೋಗೋ ಬೇರೆ ಜಾತಿಯವರು *ಮಹೇಂದ್ರ ಕುಮಾರ್, ಮಂಜುನಾಥ್ ಮಂಡ್ಯ, ರಘು ಸಕಲೇಶಪುರ ಹಾಗೂ ತೇಜಸ್ ಗೌಡ* ಅವರನ್ನು ಓಡಿಸಿ ಅಲ್ಲೆಲ್ಲಾ ಮತ್ತೆ ಬ್ರಾ.... ಕೂರಿಸಿದಾಗ ಇವರಿಗೆ *ಬಜರಂಗದಳದ* ಬಗೆಗೆ ಯಾವುದೇ ಪ್ರೀತಿ ಇರಲಿಲ್ಲಾ. ಹೋಗಲಿ *ಕರ್ನಾಟಕದಿಂದ ಬಿಜೆಪಿಯು* ಯಾವ *ಬಜರಂಗದಳದ ವ್ಯಕ್ತಿಗಳಿಗೆ* ರಾಜಕೀಯವಾಗಿ ಟಿಕೆಟ್ ನೀಡಿದೆ? ಬರಿ *ಬೀದಿಹೆಣದ* ಟಿಕೆಟ್ ನೀಡಿದೆ ಅಷ್ಟೇ.
ಧರ್ಮಗಳ ನಡುವಿನ ಜಗಳಕ್ಕೆ *ಬಜರಂಗದಳವನ್ನು* ಬಳಸಿಕೊಂಡಿದ್ದಾರೆ. ಅಲ್ಲಿನ ಹುಡುಗರ ಮೇಲೆ *ಹೆಚ್ಚು ಕೇಸುಗಳು* ದಾಖಲಾಗಿದ್ದು ಸಹ *ಬಿಜೆಪಿ ಆಡಳಿತದ* ಕಾಲದಲ್ಲೇ ಅನ್ನೋದನ್ನ ಮರೆಯಬಾರದಲ್ವಾ. *ಧರ್ಮದ ಹೆಸರಿನಲ್ಲಿ* ಪ್ರಚೋದಿಸಿ ಯಥಾಪ್ರಕಾರವಾಗಿ *ತಲ್ವಾರ್* ತಗೊಂಡು ಹೋದವರು ಬಜರಂಗದಳದವರೇ ಆಗಿದ್ದಾರೆ, ಆದರೆ ಆ ಸಂಘಟನೆಯ ಮುಖ್ಯಸ್ಥರ *ಮಕ್ಕಳೆಲ್ಲಾ* ಯಾವ ಹೋರಾಟವನ್ನೂ ಮಾಡುತ್ತಿಲ್ಲಾ. ಬಜರಂಗದಳದ ಹುಚ್ಚು ಹತ್ತಿಸಿಕೊಂಡ ಹುಡುಗರ ಕಥೆ ಏನಾಗಿದೆ? ಅವರು ಅಧಿಕಾರ ತಗೊಂಡು ಅವರ ಮನೆ ಮಕ್ಕಳ ಕೈಗೆ ಕಂಪ್ಯೂಟರ್ ಕೊಟ್ಟು ಸಾಫ್ಟ್ವೇರ್ ಇಂಜಿನಿಯರ್ ಮಾಡುತ್ತಿದ್ದಾರೆ, *ಕೆಲವರ್ಗದವರ* ಮಕ್ಕಳನ್ನು *ಬಜರಂಗದಳದ* ಹೆಸರಿನಲ್ಲಿ ಹೋರಾಟಕ್ಕೆ ಬಿಟ್ಟಿದ್ದಾರೆ. ಇಂತಹದ್ದನ್ನು ಬ್ಯಾನ್ ಮಾಡೋದರಿಂದ *ಕೆಳವರ್ಗದವರ ಅಮಾಯಕ ಯುವಕರ ಜೀವ, ಜೀವನ ಉಳಿಯುತ್ತದಲ್ಲವಾ? ತಪ್ಪೇನು* ? ಅಷ್ಟೊಂದು ಧರ್ಮದ ಒಲವಿದ್ರೆ ಅಧಿಕಾರ ಪಡೆಯುತ್ತಿರುವ *ಬ್ರಾಹ್ಮಣರು* ಮತ್ತವರ ಮಕ್ಕಳು ಹೋರಾಟ ಮಾಡಲಿ.
*ಕರ್ನಾಟಕದ ಮತದಾರರು ಸೂಕ್ಷ್ಮವಾಗಿ ಯೋಚಿಸಿ,* ಬಜರಂಗದಳದ ಹೆಸರನ್ನು *ಮುನ್ನಲೆಗೆ* ತಂದು ಬಿಜೆಪಿ ತನ್ನೆಲ್ಲಾ *ತಪ್ಪುಗಳಿಗೆ ತೇಪೆ* ಹಾಕುವ ಪ್ರಯತ್ನ ಮಾಡುತ್ತಿದೆ.
ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ.
ಇನ್ಮೇಲೆ ಅದರ ಕೂಗು ಒಂದೇ ಬಜರಂಗದಳ ಬ್ಯಾನ್ ಮಾಡ್ತಾರಂತೆ ಅಂತ.
ಆದರೆ ಬಿಜೆಪಿ ಬಜರಂಗದಳಕ್ಕಾಗಲಿ, ಹಿಂದೆ ಅದರ ಮುಖ್ಯಸ್ಥರಾಗಿದ್ದ *ಅನ್ಯವರ್ಗದವರಿಗೆ* ಮಾಡಿದ *ಮೋಸವಾಗಲಿ ಮರೆಯಬಾರದಾಗಿದೆ* .