ಕರ್ನಾಟಕ ಸಂರಕ್ಷಣಾ ವೇದಿಕೆ

ಕರ್ನಾಟಕ ಸಂರಕ್ಷಣಾ ವೇದಿಕೆ Contact information, map and directions, contact form, opening hours, services, ratings, photos, videos and announcements from ಕರ್ನಾಟಕ ಸಂರಕ್ಷಣಾ ವೇದಿಕೆ, Legal, Nelamagnala, Bangalore.

ನೆಲಮಂಗಲ KSRTC ಡಿಪೋ ವ್ಯಾಪ್ತಿಯ ಟಿ. ಬೇಗೂರು ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆ ನೀಡದಿರುವುದರಿಂದ, ಪ್ರತಿದಿನ ಕಾಲೇಜುಗಳಿ...
28/07/2026

ನೆಲಮಂಗಲ KSRTC ಡಿಪೋ ವ್ಯಾಪ್ತಿಯ ಟಿ. ಬೇಗೂರು ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆ ನೀಡದಿರುವುದರಿಂದ, ಪ್ರತಿದಿನ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಟಿ. ಬೇಗೂರು ಸುತ್ತಮುತ್ತಲಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಜನರು ಈ ಬಸ್ ನಿಲ್ದಾಣವನ್ನು ಅವಲಂಬಿಸಿದ್ದು, ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆ ನೀಡದ ಕಾರಣ ಸಮಯ ವ್ಯರ್ಥವಾಗುವುದು, ಹೆಚ್ಚುವರಿ ಪ್ರಯಾಣ ವೆಚ್ಚ ಮತ್ತು ದಿನನಿತ್ಯದ ಸಂಚಾರದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.

ಈ ಸಾರ್ವಜನಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕರ್ನಾಟಕ ಸಂರಕ್ಷಣಾ ವೇದಿಕೆ ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ಎಸ್. ಶಿವಕುಮಾರ್ ಹಾಗೂ ರಾಜ್ಯ ಕಾರ್ಯಕ್ಷರಾದ ಚಿಕ್ಕಹನುಮಯ್ಯ ಅವರ ನೇತೃತ್ವದಲ್ಲಿ, , ತಾಲೂಕು ಅಧ್ಯಕ್ಷರು, ರಂಗ ರಾಜು. ಜಿ ಆರ್ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಮೂರ್ತಿ N ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಇಂದು ನೆಲಮಂಗಲ KSRTC ಡಿಪೋ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿ, ಟಿ. ಬೇಗೂರು ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳಿಗೆ ಕಡ್ಡಾಯವಾಗಿ ನಿಲುಗಡೆ ನೀಡುವಂತೆ ಒತ್ತಾಯಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮನವಿಯನ್ನು ಶೀಘ್ರದಲ್ಲೇ ಪರಿಗಣಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸಂರಕ್ಷಣಾ ವೇದಿಕೆ ಆಗ್ರಹಿಸುತ್ತದೆ.

ಜನರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಧ್ಯೇಯ – ಸಾರ್ವಜನಿಕರ ಹಿತಕ್ಕಾಗಿ ನಮ್ಮ ಹೋರಾಟ ನಿರಂತರ.

09/03/2026

ನೆಲಮಂಗಲ: ಬೆಂಗಳೂರಿನ ಕಸದ ತೊಟ್ಟಿಯಾಗುತ್ತಿರುವ ನೆಲಮಂಗಲಕ್ಕೆ ಈಗ ವೃಷಭಾವತಿ ನದಿಯ ಕಲುಷಿತ ನೀರನ್ನು ಹರಿಸುವ ಸರ್ಕಾರದ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. "ವಿಷಕಾರಿ ನೀರು ನಮಗೆ ಬೇಡ" ಎಂದು ಆಗ್ರಹಿಸಿರುವ ಕರ್ನಾಟಕ ಸಂರಕ್ಷಣಾ ವೇದಿಕೆ (ಕಸಂವೇ), ಈ ಯೋಜನೆಯ ವಿರುದ್ಧ ಬೃಹತ್ ಹೋರಾಟಕ್ಕೆ ಸಜ್ಜಾಗಿದೆ.

ಅಂತರ್ಜಲ ವಿಷಮಯವಾಗುವ ಭೀತಿ:

ರಾಜ್ಯ ಕಾರ್ಯಾಧ್ಯಕ್ಷರಾದ ಬಿ.ಕೆ. ಚಿಕ್ಕಹನುಮಯ್ಯ ಮಾತನಾಡಿ, "ಅರೆಬರೆ ಶುದ್ಧೀಕರಿಸಿದ ನೀರು ಇಲ್ಲಿನ ಅಂತರ್ಜಲವನ್ನು ವಿಷವಾಗಿಸುತ್ತದೆ. ಜನರಿಗೆ ಮಾರಕ ಕಾಯಿಲೆಗಳನ್ನು ಉಡುಗೊರೆಯಾಗಿ ನೀಡಲು ಅಧಿಕಾರಿಗಳು ಸಂಚು ರೂಪಿಸಿದ್ದಾರೆ. ತಾಲೂಕಿನ ಎಲ್ಲಾ ಕನ್ನಡಪರ, ದಲಿತಪರ ಹಾಗೂ ರೈತ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು," ಎಂದರು.

ನೆಲಮಂಗಲ ಬಂದ್ ಎಚ್ಚರಿಕೆ:

ಒಂದು ವೇಳೆ ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದುವರಿಸಿ, ಅಶುದ್ಧ ನೀರನ್ನು ಹರಿಸಲು ಮುಂದಾದರೆ ಇಡೀ ತಾಲೂಕಿನಾದ್ಯಂತ ಬಂದ್ ಆಚರಿಸಿ, ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ. ನೆಲದ ಹಿತ ಮತ್ತು ಜನರ ಆರೋಗ್ಯಕ್ಕಾಗಿ ನಡೆಯುತ್ತಿರುವ ಈ 'ನೀರು ಬೇಡ' ಹೋರಾಟವು ಈಗ ಜನಪರ ಚಳವಳಿಯಾಗಿ ರೂಪಾಂತರಗೊಳ್ಳುತ್ತಿದೆ.

,

ದಿನಾಂಕ ೦೮/೦೩/೩೦೩೬ ರಂದು ನಡೆದ ತಾಲೂಕು ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್...
09/03/2026

ದಿನಾಂಕ ೦೮/೦೩/೩೦೩೬ ರಂದು ನಡೆದ ತಾಲೂಕು ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷರಾದ ಎಸ್. ಶಿವಕುಮಾರ್, "ಬೆಂಗಳೂರಿನ ಕೊಳಚೆಯನ್ನು ನೆಲಮಂಗಲದ ಕೆರೆಗಳಿಗೆ ತುಂಬಿಸಿ ರೈತರ ಬದುಕನ್ನು ನಾಶಮಾಡಲು ನಾವು ಬಿಡುವುದಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಎರಡನೇ ಹಂತದ (Secondary Treatment) ಅಶುದ್ಧ ನೀರನ್ನು ಹರಿಸಲು ಸರ್ಕಾರ ಮುಂದಾಗಿರುವುದು ಈ ಭಾಗದ ಜನರಿಗೆ ಮಾಡುತ್ತಿರುವ ದ್ರೋಹ," ಎಂದು ಗುಡುಗಿದ್ದಾರೆ.

ಇದೇ ಸಂದರ್ಭದಲ್ಲಿ ನೆಲಮಂಗಲದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕರ್ತರು ಒಕ್ಕೊರಲಿನಿಂದ ಹೋರಾಡಬೇಕು ಎಂದು ಕರೆ ನೀಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಬಿ.ಎನ್. ಗಂಗಾಧರ್, ನೆಲಮಂಗಲ ತಾಲೂಕು ಅಧ್ಯಕ್ಷ ಗಂಗರಾಜು ಜಿ.ಆರ್., ಉಪಾಧ್ಯಕ್ಷರಾದ ತಿಮ್ಮಯ್ಯ ಹಾಗೂ ಶಿವಕುಮಾರ್ ಎಂ., ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಎನ್ , ಸಂಘಟನಾ ಕಾರ್ಯದರ್ಶಿ ಮನೋಜ್ ಎನ್., ಜಂಟಿ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಂಚಾಲಕರಾದ ಶಿವಕುಮಾರ್ ಹಾಗೂ ರಮೇಶ್, ಕಾರ್ಮಿಕ ಘಟಕದ ಕಸಬಾ ಹೋಬಳಿ ಅಧ್ಯಕ್ಷ ಬಿ.ಎಚ್. ರಘುಕುಮಾರ್ ಸೇರಿದಂತೆ ಹಲವು ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

09/03/2026
ದಿನಾಂಕ ೦8/೦3/2026 ರಂದು ನಡೆಯಲಿರುವ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೇರ್ಪಡೆ ಕಾರ್ಯಕ್ರಮ ವನ್ನು ನೆಲಮಂಗಲದ ಪರಿವೀಕ್ಷಣಾ ಮಂದ...
06/03/2026

ದಿನಾಂಕ ೦8/೦3/2026 ರಂದು ನಡೆಯಲಿರುವ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೇರ್ಪಡೆ ಕಾರ್ಯಕ್ರಮ ವನ್ನು ನೆಲಮಂಗಲದ ಪರಿವೀಕ್ಷಣಾ ಮಂದಿರದಲ್ಲಿ ಬೆಳ್ಳಿಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಮ್ಮ ನೆಚ್ಚಿನ ಸಂಸ್ಥಾಪಕರು ಹಾಗೂ ರಾಜ್ಯಾದ್ಯಕ್ಷರು ಆದ ಶ್ರೀಯುತ ಎಸ್. ಶಿವಕುಮಾರ್ ಹಾಗೂ ರಾಜ್ಯ ಕಾರ್ಯಾಧ್ಯಕ್ಷರು ಆದ ಶ್ರೀಯುತ ಬಿ. ಕೆ. ಹನುಮಯ್ಯ ರವರಿಗೆ ಹೃದ್ಪೂರ್ವಕ ಸ್ವಾಗತ ವನ್ನು ಕೋರುತ್ತೇವೆ.

06/03/2026

ದಿನಾಂಕ 08/02//2026 ರಂದು ನಡೆದ ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರದ ಶ್ರೀಯುತ ಎಸ್. ಶಿವಕುಮಾರ್ ರವರಿಗೆ ವಿಶ್ವ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಹಾಗೂ ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದಕ್ಷರಾದ ಬಿ. ಕೆ .ಚಿಕ್ಕಹನುಮಯ್ಯ ರವರು ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದರು.

Address

Nelamagnala
Bangalore
562123

Website

Alerts

Be the first to know and let us send you an email when ಕರ್ನಾಟಕ ಸಂರಕ್ಷಣಾ ವೇದಿಕೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category